ಮೋಟಾರ್ ಸೈಕಲ್ ಕಳ್ಳತನ
ನಗರ ಪೊಲೀಸ್ ಠಾಣೆ ಮೊ.ಸಂ.8/2014 – ಕಲಂ:379 ಐಪಿಸಿ – ದಿನಾಂಕ 15/01/2014
ರಂದು 1515 ಗಂಟೆಯಲ್ಲಿ ಪಿರ್ಯಾದುದಾರರು ಪರಮೇಶ್ವರಪ್ಪ ಇವರು ಆರ್ಜಿ
ರಸ್ತೆಯಲ್ಲಿ ಹಿರೋಹೊಂಡ ಸ್ಲ್ಪೆಂಡರ್ ಕೆಎ 18 ಜೆ
1172 ದ್ವಿಚಕ್ರ ವಾಹನದಲ್ಲಿ ಹೋಗಿದ್ದು
ವಾಹನವನ್ನು ಕೆ .ಎಂ.ರಸ್ತೆಯ ಭರಣಿ ವೈನ್ಸ್
ಎದುರು ಭಾಗದಲ್ಲಿ ನಿಲ್ಲಿಸಿ ಸಂತೆಗೆ
ಹೋಗಿ ತರಕಾರಿ ಖರೀದಿ ಮುಗಿಸಿಕೊಂಡು ಸಂಜೆ ಬಂದಾಗ
ಪಿರ್ಯಾದಿಯ ವಾಹನವು ನಿಲ್ಲಿಸಿದ್ದ ಜಾಗದಲ್ಲಿ ಸ್ಥಳದಿಂದ ಕಾಣೆಯಾಗಿತ್ತು.
ಮನೆ ಕಳ್ಳತನ ಪ್ರಕರಣ
ನಗರ ಪೊಲೀಸ್
ಠಾಣೆ ಮೊ.ಸಂ.9/2014 – ಕಲಂ:454 457 380 ಐಪಿಸಿ – ಪಿರ್ಯಾದುದಾರರು
ಶಾಂತರಾಮ ಪಾಯಸ್ ಕಾಂಪೌಂಡ್ ಕೆಳಭಾಗ ಇವರು ದಿನಾಂಕ 27/01/2014 ರಂದು ಸ್ವಂತ ಊರಾದ
ಕುಂದಾಪುರಕ್ಕೆ ತೆರಳಿದ್ದು ದಿನಾಂಕ 28/01/2014 ರಂದು ಸಂಜೆ ಬಂದು ನೋಡಿದಾಗ ನಮ್ಮ ಮನೆಗೆ
ಬಾಗಿಲ ಒಳ ಬಾಗದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಒಳಕ್ಕೆ ನುಗ್ಗಿ ಒಂದು ಬೆಳ್ಳಿಯ ಲೋಟವನ್ನು
ಒಂದು ಗ್ರಾಂ.ಚಿನ್ನದಿಂದ ಮಾಡಿದ ಎರಡು ಜೊತೆ ಬಳೆ ಹಾಗೂ ಒಂದು ಗ್ರಾಂ ಚಿನ್ನದಿಂದ ಮಾಡಿದ ಒಂದು
ಜೊತೆ ಕಿವಿಯ ಜುಮುಕಿಯನ್ನು ಕಳ್ಳತನ ಮಾಡಿರುತ್ತಾರೆ ಹಾಗೆಯೇ.ನಮ್ಮ ದೇವರ ಕೋಣೆಯಲ್ಲಿ ಇಟ್ಟಿದ್ದ
ಸುಮಾರು ಮುಕ್ಕಾಲು ಅಡಿ ಎತ್ತರದ ಹುಂಡಿಯಲ್ಲಿ ಹಾಕಿದ್ದ ಸುಮಾರು 40.000/- ರೂ ಹಣವನ್ನು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ.ಒಟ್ಟು ಕಳುವಾದ ವಸ್ತುಗಳ ಒಟ್ಟು ಮೌಲ್ಯ 48.000/- ರೂ ಆಗಿರುತ್ತೆ.
ಮನೆ ಕಳ್ಳತನ ಪ್ರಕರಣ
ಬಸವನಹಳ್ಳಿ ಪೊಲೀಸ್
ಠಾಣೆ ಮೊ.ಸಂ.21/2014 – ಕಲಂ:454 457 380 ಐಪಿಸಿ – ಪಿರ್ಯಾದಿ ಪೆಟ್ರೋಲ್ ಬಂಕಿನ ಒಳಗೆ ಊಟ ಮಾಡುತ್ತಿದ್ದಾಗ ಕೆಎ.46 ಇ.4165 ಡಿಸ್ಕವರ್
ಮೋಟಾರ್ ಸೈಕಲ್ಲಿನಲ್ಲಿ ಮೂರು ಜನ ಅಪರಿಚಿತರು ಬಂದು ಪೆಟ್ರೋಲ್ ಹಾಕುವಂತೆ ಹೇಳಿ ತಳ್ಳಿದಾಗ
ಪಿರ್ಯಾದುದಾರರು ಬಾಗಿಲು ತೆಗೆದಿರುತ್ತಾರೆ.
ಆಗ ಅವರುಗಳು ಪಿರ್ಯಾದಿ ಮತ್ತು
ಅವರೊಂದಿಗೆ ಇದ್ದ ರುದ್ರೇಶ ರವರ ಮೇಲೆ ಕೈಗಳಿಂದ ಹಲ್ಲೆ ನಡೆಸಿ ಟೇಬಲ್ ಮೇಲಿದ್ದ 18000ರೂ ನಗದು
ಹಣವನ್ನು ತೆಗೆದುಕೊಂಡಿರುತ್ತಾರೆ. ಹಣವನ್ನು ಪಿರ್ಯಾದಿ ಮತ್ತು ರುದ್ರೇಶ್ ವಾಪಸು ತೆಗೆದುಕೊಂಡಾಗ
ಮೂರು ಜನ ಅಪರಿಚಿತರು ಹಣವನ್ನು ಕಿತ್ತುಕೊಂಡು ಬಂಕಿನ ಒಳಗೆ ಇಟ್ಟಿದ್ದ ಡೀಸಲ್ ತುಂಬಿಸಿದ್ದ 35 ಲೀಟರ್ ಕ್ಯಾನನ್ನು ತೆಗೆದುಕೊಂಡು
ಹೋಗಿರುತ್ತಾರೆ ಇತ್ಯಾದಿ
ಮೋಟಾರ್ ಸೈಕಲ್ ಕಳ್ಳತನ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ. 06/2014 – ಕಲಂ:379 ಐಪಿಸಿ – ಪಿರ್ಯಾದಿ ಸಿಲ್ವನ್ ಡಿಸೋಜ ಅತ್ತಿಗೆರೆ
ಗ್ರಾಮ ವಾಸಿ ಇವರು ದಿನಾಂಕ 27/01/2014 ರಂದು ಪಿರ್ಯಾದಿ ಗೆಳೆಯ ಮಂಗಳೂರು
ತಾಲ್ಲೂಕು ಬಡಗು ಮಿಜಾರ್ ಗ್ರಾಮದ ಕುಮಾರ್ ರವರ ಬಾಬ್ತು ಮೋಟಾರ್ ಸೈಕಲ್ ನಂಬರ್ ಕೆ,ಎ- 19,
ಆರ್-6974 ಸಂಖ್ಯೆಯ ಕೇಸರಿ ಪಟ್ಟಿ ಇರುವ ಕಪ್ಪು ಬಣ್ಣದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು
ಅತಿಥಿ ಲಾಡ್ಜ್ ನ ಹೊರಬಾಗದಲ್ಲಿ ಸದರಿ ಬೈಕನ್ನು ನಿಲ್ಲಿಸಿ, ಬೆಳಿಗ್ಗೆ ಎದ್ದು, ನೋಡಲಾಗಿ ಬೈಕ್
ಅಲ್ಲಿ ಇರಲಿಲ್ಲ. ಪತ್ತೆ ಮಾಡಿಕೊಡಲು ಕೋರಿ.
ಜೂಜಾಟ ಪ್ರಕರಣ
ಬೀರೂರು ಪೊಲೀಸ್ ಠಾಣೆ ಮೊ.ಸಂ. 12/2014 – ಕಲಂ:87 ಕೆಪಿ ಆಕ್ಟ್- ದಿನಾಂಕ 28/01/2014 ರಂದು 1820 ಗಂಟೆಯಲ್ಲಿ ಸಿಪಿಐ
ಬೀರೂರು ಇವರು ಕಛೇರಿಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಮೃತ್ಮಹಲ್ ಬಳಿ
ಸಿಬ್ಬಂದಿಗಳೊಂದಿಗೆ ಹೋಗಿ ನೋಡಲಾಗಿ 5-6 ಜನರು ವೃತ್ತಕಾರವಾಗಿ ಕುಳಿತುಕೊಂಡು ಅಂದರ್ ಬಾಹರ್
ಜೂಜಾಟ ಆಡುತ್ತಿದ್ದು, ಪೊಲೀಸ್ರವರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದರವರನ್ನು ಹಿಡಿದು ಅವರು
ಆಟಕ್ಕೆ ಉಪಯೋಗಿಸಿದ ಚಾಪೆ ಅಖಾಡಕ್ಕೆ ಬಳಸಿದ ಹಣ 2870/- ರೂ ಮತ್ತು 52 ಇಸ್ಪೀಟು
ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಮುದಿಯಪ್ಪ ಹಾಗು ಇತರೆ 5 ಜನರನ್ನು ದಸ್ತಗಿರಿ
ಮಾಡಿರುತ್ತೆ
ಅಪಘಾತದಲ್ಲಿ ಸಾವು
ಕುದುರೆಮುಖ ಪೊಲೀಸ್ ಠಾಣೆ ಮೊ.ಸಂ. 03/2014 – ಕಲಂ:279 304(ಎ) ಐಪಿಸಿ ರೆ.ವಿ 134(ಎ)(ಬಿ) ಐಎಂವಿ
ಆಕ್ಟ್ - ದಿನಾಂಕ:-29.01.2014 ರಂದು ಬೆಳಿಗ್ಗೆ 07.30 ಗಂಟೆಗೆ ಡಿ ಎನ್ . ಉಮಾಶಂಕರ್ ತುಮಕೂರು ನಗರ ಇವರು ದೂರು
ನೀಡಿದ್ದು ಇವರ ತಮ್ಮನಾದ ಡಿ .ಎನ್.
ವೇದಾಂತ ಬಿನ್ ನಾರಾಯಣಚಾರ್ 19 ವರ್ಷ 2 ನೇ ಬಿ ಇ ವಿಧ್ಯಾರ್ಥಿ ವಾಸ
ಎಸ್ ಎಸ್ ಪುರಂ ತುಮಕೂರು ನಗರ ಈತನು
ತನ್ನ ಸ್ನೇಹಿತನಾದ ಕೆ.ಎನ್ ಸಂತೋಷ ಬಿನ್ ಲೇ||
ನರಸಿಯಪ್ಪ 21 ವರ್ಷ ವಾಸ ತುಮಕೂರು ನಗರ
ಈತನೊಂದಿಗೆ ಕೆಎ-06 ಇಕೆ-4549 ಅಪಾಚಿ ಆರ್ ಟಿ ಆರ್ 160 ಟಿ ವಿ ಎಸ್ ಬೈಕ್ ನಲ್ಲಿ ಹೊರನಾಡು
ಮತ್ತು ಉಡುಪಿ ನೋಡಲೆಂದು ದಿನಾಂಕ:-25.01.2014 ರಂದು ಬಂದು ಹೊರನಾಡಿನಲ್ಲಿ ದೇವರ ದರ್ಶನ ಮಾಡಿಕೊಂಡು ನಂತರ ಉಡುಪಿಗೆ ಹೋಗಲೆಂದು
ದಿನಾಂಕ:-25.01.2014 ರಂದು ಮಧ್ಯಾಹ್ನ 14.00 ಗಂಟೆಯ ಸಮಯದಲ್ಲಿ ಕಳಸ- ಕುದುರೆಮುಖ ರಸ್ತೆಯ
ನಲ್ಲೀಬೀಡು ಎಸ್ ತಿರುವಿನಲ್ಲಿ ಬರುತ್ತಿರುವಾಗ
ಬೈಕ್ ಚಾಲನೆ ಮಾಡುತಿದ್ದ ಕೆ ಎನ್ ಸಂತೋಷನು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದಾ
ಚಲಾಯಿಸಿದ್ದರ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ
ರಸ್ತೆಗೆ ಬಿದ್ದ ಪರಿಣಾಮ ಬೈಕ್ ನ ಹಿಂಬಂದಿ ಕುಳಿತಿದ್ದ ಪಿರ್ಯಾದುದಾರರ ತಮ್ಮ ಡಿ.ಎನ್ ವೇದಾಂತನಿಗೆ ಎಡಕಾಲು
ಮುರಿದು. ಮೈ ಕೈಗೆ ಪೆಟ್ಟಾಗಿದ್ದು ತಕ್ಷಣ
108 ಅಂಬ್ಯುಲೆನ್ಸ್ ನಲ್ಲಿ ಮಣಿಪಾಲ್ ಕೆ ಎಂ ಸಿ
ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:-28.01.2014 ರಂದು
17.20 ಗಂಟೆಗೆ ಮೃತಪಟ್ಟಿರುತ್ತಾರೆ ಈ
ಅಪಘಾತದಲ್ಲಿ ಬೈಕ್ ಚಲಾಯಿಸುತಿದ್ದ ಕೆ ಎನ್ ಸಂತೋಷನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು
ಸಂತೋಷನು ಬೈಕನ್ನು ಸ್ಥಳದಿಂದ ತೆಗೆದುಕೊಂಡು ಹೋಗಿರುತ್ತಾನೆ