ಅಕ್ರಮ ಮದ್ಯ ವಶ
ಬಸವನಹಳ್ಳಿ ಪೊಲೀಸ್
ಠಾಣೆ ಮೊ.ಸಂ.27/2014 – ಕಲಂ:34 ಕೆ.ಇ. ಆಕ್ಟ್ – ದಿನಾಂಕ
01/02/2014 ರಂದು1730 ಗಂಟೆಯಲ್ಲಿ ಡಿಸಿಐಬಿ ಇನ್ಸ್ಪೆಕ್ಟರ್ ಮತ್ತು ತಮ್ಮ
ಸಿಬ್ಬಂದಿ ಮತ್ತು ಪಂಚಾಯಿತದಾರರೊಂದಿಗೆ ಸಂಜೆ ಉಪ್ಪಳ್ಳಿ ದರ್ಗಾ ಬಳಿ ಹೋಗಿ ಕಾಯುತ್ತಿದ್ದಾಗ
ಎರಡು ಜನರು ಕೆಎ.18 ಕ್ಯೂ.1843 ಮೋಟಾರ್ ಸೈಕಲ್ಲಿನಲ್ಲಿ ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದು ಪಿಐ
ರವರು ಅವರನ್ನು ತಡೆದು ಪರಿಶೀಲಿಸಲಾಗಿ ಅವರು ಯಾವುದೇ ಪರವಾನಗಿ ಇಲ್ಲದೆ 180 ಎಂ.ಎಲ್. ಕ್ಯಾಪ್ಟನ್
ಮಾರ್ಟಿನ್ 30 ವಿಸ್ಕಿ ಬಾಟಲಿಗಳು, ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 90 ಎಂ.ಎಲ್.ನ 36 ಸ್ಯಾಚೆಟ್
ಗಳು ಇದ್ದು ರಟ್ಟಿನ ಬಾಕ್ಸಿನಲ್ಲಿ 330
ಎಂ.ಎಲ್.ನ ಕಿಂಗ್ ಫೀಶರ ಬೀರ್ ಬಾಟಲಿಗಳಿರುವುದು
ಕಂಡು ಬಂದ ಮೇರೆಗೆ ಅವರುಗಳನ್ನು ವಿಚಾರ ಮಾಡಲಾಗಿ
ಮಧ್ಯವನ್ನು ಉಪ್ಪಳ್ಳಿಯಲ್ಲಿ ಮಾರಾಟ ಮಾಡಲು ಅಕ್ಷಯ ಬಾರ್ ಮಾಲೀಕರಾದ ಗ್ಲಾಡ್ಸನ್
ಪಿಂಟೋರವರು ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಆರೋಪಿಗಳಾದ ಯೂಸಪ್ ಹಾಗೂ ಗಂಗಾಧರ ಇವರನ್ನು ದಸ್ತಗಿರಿ
ಮಾಡಿ ಅವರ ವಶದಲ್ಲಿದ್ದ 3500ರೂ ಬೆಲೆಯ ಮಧ್ಯವನ್ನು ಮಹಜರ್ ಮುಖೇನ ವಶಪಡಿಸಿಕೊಂಡಿರುತ್ತೆ.
ದೇವಸ್ಥಾನದ ವಿಗ್ರಹ ಕಳುವು
ಪ್ರಕರಣ
ಗೋಣಿಬೀಡು ಪೊಲೀಸ್
ಠಾಣೆ ಮೊ.ಸಂ.14/2014 – ಕಲಂ:454 457 380 ಐಪಿಸಿ – ಶ್ರೀ ಕ್ಷೇತ್ರ ಅಂಗಡಿಯ ಸಂಚಾಲಕರಾದ ಎ.ಎಸ್
ನಾಗರಾಜ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01/02/2014 ರಂದು ಅಂಗಡಿ ಗ್ರಾಮದ ಜೈನ ಬಸದಿಯ 3 ತೀರ್ಥಂಕರ ವಿಗ್ರಹ ಹಾಗೂ ಒಂದು ನೇಮಿನಾಥ
ವಿಗ್ರಹ ಕಳ್ಳತನವಾಗಿದೆ ಎಂದು ಬಸದಿಯ ಅರ್ಚಕರಾದ ಧರಣೇಂದ್ರಭಟ್ ರವರು ಪೋನ್ ಮುಖಾಂತರ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾದ ಸುಮಾರು
900 ವರ್ಷಗಳ ಪುರಾತನ ಕಾಲದ ತೀರ್ಥಂಕರ ಬಸದಿಯಲ್ಲಿದ್ದ
22 ನೇ ತೀರ್ಥಂಕರ ನೇಮಿನಾಥ ಸ್ವಾಮಿ, 23 ನೇ ತೀರ್ಥಂಕರ ಆದಿನಾಥ ಸ್ವಾಮಿ, 24 ನೇ ತೀರ್ಥಂಕರ ಮಲ್ಲಿನಾಥ ಸ್ವಾಮಿ ವಿಗ್ರಹಗಳು, ಹಾಗೂ ಮಹಾವೀರ ಬಸದಿಯಲ್ಲಿದ್ದ ನೇಮಿನಾಥ
ವಿಗ್ರಹ ಕಳ್ಳತನವಾಗಿರುತ್ತೆ.ದಿನಾಂಕ:29/01/2014 ರಂದು ಬುಧವಾರ ಬೆಳಿಗ್ಗೆ ಅರ್ಚಕರು
ಕೊನೆಯದಾಗಿ ನೋಡಿರುತ್ತಾರೆ.ಸದರಿ ದೇವಸ್ಥಾನದ ನಾಲ್ಕು ವಿಗ್ರಹಗಳನ್ನು ಗರ್ಭಗುಡಿಯ ಬಾಗಿಲು ತೆಗೆದು
ಒಳನುಗ್ಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳ ಅಂದಾಜು ಬೆಲೆ 70 ಲಕ್ಷ ರೂ ಗಳಾಗಿರುತ್ತೆ.