ಕೊಲೆ ಪ್ರಕರಣ
ಮೂಡಿಗೆರೆ ಪೊಲೀಸ್
ಠಾಣೆ ಮೊ.ಸಂ. 155/2013 – ಕಲಂ: 302 201 ಐಪಿಸಿ - ಮೂಡಿಗೆರೆ ಪಟ್ಟಣದ ಶಿಶು ಅಭಿವೃದ್ದಿ ಇಲಾಖೆಯ
ಕಟ್ಟಡದ ಪಕ್ಕದ ಬಾಲವನದ ತಂತಿ ಬೇಲಿಯ ಹತ್ತಿರ ಪಿರ್ಯಾದುದಾರರಾದ ರಾಮೇಗೌಡ ಮಾಕೋನಹಳ್ಳಿ ವಾಸಿ
ಇವರ ಮಗನಾದ 28 ವರ್ಷ ಪ್ರಾಯದ ಎಂ.ಆರ್.ಸಂತೋಷ ಈತನು ಮೃತಪಟ್ಟಿದ್ದು ಅವನ ಕೈ, ಕಾಲು, ಪಾದ ಮತ್ತು
ಹಸ್ತ ಊದಿಕೊಂಡಿದ್ದು ಎಡ ಕೈಯಲ್ಲಿ ರಕ್ತ ಬಂದಿದ್ದು, ಸೊಂಟದ ಹತ್ತಿರ ಸ್ವಲ್ಪ ಕಪ್ಪು
ಕಂದಿರುವಂತೆ ಕಂಡು ಬಂದಿದ್ದು ಅವನ ಸಾವಿನ ಬಗ್ಗೆ ಅನುಮಾನ ಇರುತ್ತೆ ಇತ್ಯಾದಿ ದೂರಿನ ಮೇರೆಗೆ ಮೂಡಿಗೆರೆ
ಪೊಲೀಸ್ ಠಾಣೆಯಲ್ಲಿ ಯು.ಡಿ.ನಂಬರ್:24/13 ಕಲಂ:174(ಸಿ) ಸಿ.ಆರ್.ಪಿ.ಸಿ. ರೀತ್ಯ ದಿನಾಂಕ
28/10/2013 ರಂದು ಕೇಸು ದಾಖಲಾಗಿದ್ದು, ಈ ದಿವಸ ಬಂದ ಮೃತನ ಪಿ.ಎಂ. ವರದಿಯನ್ನು ಮೃತನ ಸಾವಿನ
ಬಗ್ಗೆ ವೈಧ್ಯಾಧಿಕಾರಿಗಳು ಯಾವುದೋ ಆಯುಧದಿಂದ ಹೊಡೆದ ಗಾಯದಿಂದ ಹಾಗು ಉಸಿರುಗಟ್ಟಿಸಿ ಕೊಲೆ
ಮಾಡಿರುವ ಬಗ್ಗೆ ಅಭಿಪ್ರಾಯ ನೀಡಿದ್ದು ಈ ಬಗ್ಗೆ ಪಿರ್ಯಾದುದಾರರು ತನ್ನ ಮಗನನ್ನು ಯಾರೋ ಯಾವುದೋ
ಕಾರಣಕ್ಕಾಗಿ ಯಾವುದೋ ಆಯುಧದಿಂದ ಹೊಡೆದ ಗಾಯದಿಂದ ಹಾಗು ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾರೆ
ಇತ್ಯಾದಿ ನೀಡಿದ ಮರು ದೂರಿನ ಮೇರೆಗೆ ಈ ಪ್ರ.ವ.ವರದಿ.
ಮಟ್ಕಾ ಜೂಜಾಟ ಪ್ರಕರಣ
ಲಕ್ಕವಳ್ಳಿ ಪೊಲೀಸ್
ಠಾಣೆ ಮೊ.ಸಂ. 78/2013 – ಕಲಂ: 78 ಕ್ಲಾಸ್(3) ಕೆಪಿ ಅಕ್ಟ್ – ದಿನಾಂಕ 26/11/2013
ರಂದು 1620 ಗಂಟೆಯಲ್ಲಿ ಮಟಕಾ
ಚೀಟಿ ಬರೆಯುತ್ತಿರುವುದಾಗಿ ದೂರವಾಣಿ ಮಾಹಿತಿ ಬಂದಿದ್ದು , ಮರೆಮಾಚಿಕೊಂಡು ಹೋಗಿ ನೊಡಿದಾಗ ಬಸ್
ನಿಲ್ದಾಣದಲ್ಲಿ ಒಬ್ಬ ಆಸಾಮಿಯು ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಇದು ಮಟಕಾ
ಜೂಜಾಟ ಸಿಂಗಲ್ ನಂಬರ್ ಗೆ 5-00 ರೂ ಕಟ್ಟಿದ್ದರೆ, ನೀವು ಕಟ್ಟಿದ ನಂಬರ್ ಪಾಸ್ ಆದರೆ 50-00 ರೂ
ಕೊಡುವುದಾಗಿಯೂ ಅದೇ ರೀತಿ ಡಬಲ್ ನಂಬರ್ ಗೆ 5-00 ರೂ ಕಟ್ಟಿದರೆ 400-00 ರೂ ಕೊಡುವುದಾಗಿ
ಹೇಳುತ್ತಾ ಸಾರ್ವಜನಿಕರಿಗೆ ಹುರಿದುಂಬಿಸಿ
ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟಕಾ ಚೀಟಿ ಬರೆಯುತ್ತಾ ಮಟಕಾ ಜೂಜಾಟ ಆಡುತ್ತಿರುವುದು
ಕಂಡು ಬಂತು. ಹಾಗೂ ತನ್ನ ಮೊಬೈಲ್ ನಲ್ಲಿಯೂ ಕೂಡ ಯಾರಿಗೋ ಫೋನ್ ಮಾಡುತ್ತಾ ಚೀಟಿಯಲ್ಲಿ ನಂಬರ್
ಗಳನ್ನು ಬರೆದು ಕೊಳ್ಳುತ್ತಿದ್ದನು. ಕೂಡಲೆ ನಾವು ಆತನನ್ನು ಸತ್ತುವರೆದು ಹಿಡಿಯಲು ಹೋದಾಗ
ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಲು ಪ್ರಯತ್ನಿಸಿದವನನ್ನು ಹಿಡಿದುಕೊಂಡು ಬಂದು ನನ್ನ
ಮುಂದೆ ಹಾಜರುಪಡಿಸಿದ್ದು , ಆತನ ಹೆಸರು
ತಿಳಿಯಲಾಗಿ “ ಶೇಖರ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಅಂಗಶೋದನೆ
ಮಾಡಿ ನೋಡಲಾಗಿ ಆತನ ಪ್ಯಾಂಟಿನ ಬಲ ಜೇಬಿನಲ್ಲಿ
ವಿವಿಧ ಅಂಕೆ ಸಂಖ್ಯೆಗಳನ್ನು ಬರೆದಿರುವ ಮಟಕಾ ಚೀಟಿ ಹಾಗೂ ರಿಲಯನ್ಸ್ ಕಂಪನಿಯ ಒಂದು
ಮೊಬೈಲ್ ಸೆಟ್ ಇದ್ದು , ಆತನ ಶರಟಿನ ಮೇಲ್ಬಾಗದ ಜೇಬಿನಲ್ಲಿ ಹಣ ವಿದ್ದು ಹಣವನ್ನು ಪಂಚರ
ಸಮ್ಕಕ್ಷಮದಲ್ಲಿ ಎಣಿಕೆ ಮಾಡಿ ನೊಡಲಾಗಿ ಒಟ್ಟು 595/-ರೂ ಹಣವಿದ್ದು, ಸದರಿ ಹಣ, ಮಟಕಾ ಚೀಟಿ ಮತ್ತು ಮೊಬೈಲ್ ಸೆಟ್ ನ್ನು ಪಂಚರ
ಸಮಕ್ಷಮದಲ್ಲಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ.
ಮಟ್ಕಾ ಜೂಜಾಟ ಪ್ರಕರಣ
ಲಕ್ಕವಳ್ಳಿ ಪೊಲೀಸ್
ಠಾಣೆ ಮೊ.ಸಂ. 79/2013 – ಕಲಂ: 78 ಕ್ಲಾಸ್(3) ಕೆಪಿ ಅಕ್ಟ್ – ದಿನಾಂಕ 26/11/2013
ರಂದು 0600 ಗಂಟೆಯಲ್ಲಿ ಬಸವೇಶ್ವರ ಹಾಸ್ಪೀಟಲ್
ಎದುರುಗಡೆ ಮಟ್ಕಾ ನಡೆಸುತ್ತಿರುವ ಬಗ್ಗೆ ದೂರವಾಣಿ ಮಾಹಿತಿ ಬಂದಿದ್ದು, ಕೂಡಲೆ
ಮರೆಮಾಚಿಕೊಂಡು ಹೋಗಿ ನೊಡಿದಾಗ ಬಸವೇಶ್ವರ
ಆಸ್ಪತ್ರೆಯ ಮುಂದೆ ಟಿ,ಎಂ, ರಸ್ತೆಯಲ್ಲಿ ಒಬ್ಬ
ಆಸಾಮಿಯು ಬಸ್ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಇದು ಮಟಕಾ ಜೂಜಾಟ ಸಿಂಗಲ್ ನಂಬರ್ ಗೆ 5-00
ರೂ ಕಟ್ಟಿದ್ದರೆ, ನೀವು ಕಟ್ಟಿದ ನಂಬರ್ ಪಾಸ್ ಆದರೆ 50-00 ರೂ ಕೊಡುವುದಾಗಿಯೂ ಅದೇ ರೀತಿ ಡಬಲ್
ನಂಬರ್ ಗೆ 5-00 ರೂ ಕಟ್ಟಿದರೆ 400-00 ರೂ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರನ್ನು ಹುರಿದುಂಬಿಸುತ್ತಾ ಸಾರ್ವಜನಿಕರಿಂದ
ಹಣ ಪಡೆದು ಮಟಕಾ ಚೀಟಿ ಬರೆಯುತ್ತಾ ಮಟಕಾ ಜೂಜಾಟ ಆಡುತ್ತಿರುವುದು ಕಂಡು ಬಂತು. ಹಾಗೂ ತನ್ನ ಮೊಬೈಲ್ ನಲ್ಲಿಯೂ ಕೂಡ ಯಾರಿಗೋ ಫೋನ್
ಮಾಡುತ್ತಾ ಚೀಟಿಯಲ್ಲಿ ನಂಬರ್ ಗಳನ್ನು ಬರೆದು ಕೊಳ್ಳುತ್ತಿದ್ದನು. ಕೂಡಲೆ ನಾವು ಆತನನ್ನು
ಸತ್ತುವರೆದು ಹಿಡಿಯಲು ಹೋದಾಗ ಸಮವಸ್ತ್ರದಲ್ಲಿದ್ದ
ನಮ್ಮನ್ನು ನೋಡಿ ಓಡಲು ಪ್ರಯತ್ನಿಸಿದವನನ್ನು ಬೆನ್ನತ್ತಿ ಹಿಡಿದುಕೊಂಡು ಬಂದು ನನ್ನ
ಮುಂದೆ ಹಾಜರುಪಡಿಸಿದ್ದು, ಹೆಸರು ವಿಳಾಸ ಕೇಳಿ ತಿಳಿಯಲಾಗಿ “ ಮುರುಗ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ಅಂಗಶೋದನೆ
ಮಾಡಿ ನೋಡಲಾಗಿ ಆತನ ಪ್ಯಾಂಟಿನ ಬಲ ಜೇಬಿನಲ್ಲಿ ವಿವಿಧ ಅಂಕೆ-ಸಂಖ್ಯೆಗಳನ್ನು ಬರೆದಿರುವ ಮಟಕಾ
ಚೀಟಿ, ಎಂ,ಟಿ,ಎಸ್ ಕಂಪನಿಯ ಒಂದು ಹಳೆಯ ಮೊಬೈಲ್ ಸೆಟ್ ಹಾಗೂ ಆತನ ಶರಟಿನ ಮೇಲ್ಬಾಗದ ಜೇಬಿನಲ್ಲಿ
ಹಣವಿದ್ದು, ಹಣವನ್ನು ಪಂಚರ ಸಮಕ್ಷಮದಲ್ಲಿ ಎಣಿಕೆ
ಮಾಡಿ ನೊಡಲಾಗಿ ಒಟ್ಟು 535/-ರೂ ಹಣವಿದ್ದು,
ಅಮಾನತ್ತುಪಡಿಸಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ,.