ಮಟ್ಕಾ ಜೂಜಾಟ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 107/2013 ಕಲಂ 78 ಕ್ಲಾಸ್(3) ಕೆಪಿ ಆಕ್ಟ್– ದಿನಾಂಕ 21/03/2013 ರಂದು 1300ಗಂಟೆಯ ಸಮಯದಲ್ಲಿ ಕೈಮರದಲ್ಲಿ ಆರೋಪಿ ದುಗ್ಗಪ್ಪ ಈತನು ಮಟ್ಕಾ ಆಡಲು ಜನರನ್ನು ಕರೆಯುತ್ತಿದ್ದವನನ್ನು ಸುತ್ತವರೆದು ಹಿಡಿದು ಆತನು ಬರೆಯುತ್ತಿದ್ದ ಚೀಟ ಹಾಗೂ ಜೂಜಾಟಕ್ಕೆ ಉಪಯೋಗಿಸಿದ 310/- ರೂ ಹಣವನ್ನು ಪಂಚರ ಸಮಕ್ಷಮ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸ್ವ ಪಿರ್ಯಾದು ಮೇರೆಗೆ ಕೇಸು ನೊಂದಾಯಿಸಿಕೊಂಡಿರುತ್ತೆ.
ಅಪಘಾತದಲ್ಲಿ ಸಾವು
ಬಣಕಲ್ ಪೊಲೀಸ್ ಠಾಣೆ ಮೊ.ಸಂ- 45/2013 ಕಲಂ 279 304(ಎ) ಐಪಿಸಿ ಜೊತೆಗೆ 134 (ಎ)(ಬಿ) ಐಎಂವಿ ಆಕ್ಟ್– ದಿನಾಂಕ 21/03/2013 ರಂದು 2030 ಗಂಟೆಯಲ್ಲಿ ಬಾನಳ್ಳಿ ಗ್ರಾಮದಲ್ಲಿ ಪಿರ್ಯಾದಿ ಶಿವಣ್ಣ ಇವರು ಮನೆಯ ಹತ್ತಿರ ಇದ್ದಾಗ ಕುಮಾರ ಮನೆಯ ಹತ್ತಿರ ಬಂದು ನಿಮ್ಮ ಮಗ ಸುನೀಲ್ ಗೆ ಬಾನಹಳ್ಳಿ ಕ್ರಾಸ್ ಹತ್ತಿರ ಟ್ರಾಕ್ಟರ್ ಡಿಕ್ಕಿ ಹೊಡಿಸಿದ್ದರಿಂದ ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದನು. ಹೋಗಿ ನೋಡಲಾಗಿ ತನ್ನ ಮಗನ ತಲೆಗೆ ತೀವ್ರ ರಕ್ತಗಾಯವಾಗಿ ಮೃತಪಟ್ಟಿದ್ದನು. ಸ್ಥಳದಲ್ಲಿ ರಕ್ತವು ಹೆಪ್ಪುಗಟ್ಟಿ ಬಿದ್ದಿತ್ತು. ಸ್ಥಳದಲ್ಲಿ ಇದ್ದ ದಿನೇಶ, ದಿಲೀಪ ಮತ್ತು ಪುಟ್ಟಸ್ವಾಮಿ ರವರು ನನಗೆ ನಾವುಗಳು ಸುನೀಲ್ ನೊಂದಿಗೆ ಬಾನಹಳ್ಳಿ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಟ್ರಾಕ್ಟರ್ ನಂಬರ್ ಕೆಎ-18-ಟಿಎ-1737 ಟ್ರಾಕ್ಟರ್ ಟ್ರಾಲಿ ನಂಬರ್ ಕೆಎ-18-ಟಿಎ-1738ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿ ನಡೆದುಕೊಂಡು ಹೋಗುತ್ತಿದ್ದ ನಮ್ಮಗಳ ಪೈಕಿ ಸುನೀಲ್ ಗೆ ಡಿಕ್ಕಿ ಹೊಡೆಸಿ ಅಪಘಾತವೆಸಗಿದ್ದರಿಂದ ಸುನೀಲ್ ನು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು.ಸದರಿ ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ನ್ನು ನಿಲ್ಲಿಸದೇ ಹೊಡೆದುಕೊಂಡು ಹೋಗಿದ್ದಾಗಿ ತಿಳಿಸಿದರು.
ಅಪಘಾತದಲ್ಲಿ ಸಾವು
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 46/2013 ಕಲಂ 279 304(ಎ) ಐಪಿಸಿ – ದಿನಾಂಕ 21/03/2013 ರಂದು 1300 ಗಂಟೆಯಲ್ಲಿ ತಿಮ್ಲಾಪುರ ಗೇಟಿನ ಹತ್ತಿರ ಪಿರ್ಯಾದುದಾರರಾದ ಉಮಾಮಹೇಶ್ವರ ಇವರ ಅಣ್ಣನ ಮಗನಾದ ಸಿ.ಎಸ್. ಅರುಣಕುಮಾರ್ ಸಿ. ರೇಣುಕಪ್ಪ ರವರ ಟ್ರ್ಯಾಕ್ಟರ್ ನಂ ಕೆ.ಎ.18.ಟಿ.ಎ. 4231 ರಲ್ಲಿ ಕಬ್ಬಿಣದ ಸರಳುಗಳನ್ನು ತುಂಬಿ ಕೊಂಡು ತಿಮ್ಮಾಪುರ ಗೇಟಿನ ಹತ್ತಿರ ಅರೋಪಿ ಟ್ರ್ಯಾಕ್ಟರನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದು ಟ್ರ್ಯಲರ್ ಗೆ ಅಳವಡಿಸಿದ್ದ ಲಾಕ್ ಕಟ್ಟಾಗಿ ಟ್ರ್ಯಲರ್ ಎಂಜಿನ ಗೆ ಬಡಿದಿದ್ದು ಎಂಜಿನ್ ಪಲ್ಟಿಯಾಗಿ ಎಂಜಿನ್ ನ ಚಾಲಕನ ಪಕ್ಕ ಕುಳಿತಿದ್ದ ಅರುಣಕುಮಾರ ಕೆಳಕ್ಕೆ ಬಿದ್ದಾಗ ಅತನ ಮೇಲೆ ಎಂಜಿನ್ ನ ಬಟನ್ ಟ್ಯೆರ್ ಮೇಲೆ ಬಿದ್ದಿದ್ದು ಅರುಣಕುಮಾರ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಕಳಸ ಪೊಲೀಸ್ ಠಾಣೆ ಮೊ.ಸಂ- 10/2013 ಕಲಂ 448 323 354 506 ಐಪಿಸಿ ಜೊತೆಗೆ 3 ಕ್ಲಾಸ್(1)(11) ಎಸ್ಸಿಎಸ್ಟಿ ಆಕ್ಟ್ –ದಿನಾಂಕ 20/03/2013ರಂದು 1830ಗಂಟೆಯಲ್ಲಿ ಪಿರ್ಯಾದುದಾರರಾದ ಗೀತಾ ತಲಗೋಡು ವಾಸಿ ಇವರು ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಪಿರ್ಯಾದುದಾರರ ಮನೆಗೆ ಬಂದ ರಾಜೇಂದ್ರ ಅವರ ತಾಯಿಗೆ ಟಿ.ಟಿ. ಇಂಜೆಕ್ಷನ್ ನೀಡಿ ಕಳುಹಿಸಿ, ಸಿರಿಂಜನ್ನು ಶುಚಿಗೊಳಿಸುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಏಕಾ ಏಕಿ ಮನೆಯೊಳಗೆ ಪ್ರವೇಶಿಸಿ, ಹಿಡಿದು ಎಳೆದಾಡಿ, ತಬ್ಬಿಕೊಂಡು ಮಂಚದ ಮೇಲೆ ಎಳೆದುಕೊಂಡು ಹೋಗಿ ಕೆಡವಿಕೊಂಡು, ಕೂಗಾಡಿದರೆ ಸಾಯಿಸಿಬಿಡುತ್ತೇನೆ. ಎಂದು ಹೆದರಿಸಿದನು ಆಗ ನಾನು ಜೋರಾಗಿ ಕಿರುಚಿಕೊಂಡ ನಂತರ, ಕೈಯಿಂದ ಹೊಡೆದು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಏನು ಮಾಡಿಕೊಳ್ಳುತ್ತೀಯಾ ಎಂದು ಹೇಳಿ ಮನೆಯಿಂದ ಹೊರಟು ಹೋಗಿರುತ್ತಾನೆ.ಆರೋಪಿ ಹೆಸರು ತಿಳಿಯಲಾಗಿ ಚಿದಂಬರ ಎಂಬುದಾಗಿರುತ್ತೆ.
ಜೂಜಾಟ ಪ್ರಕರಣ
ಯಗಟಿ ಪೊಲೀಸ್ ಠಾಣೆ ಮೊ.ಸಂ- 21/2013 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 21/03/2013 ರಂದು 1800 ಗಂಟೆಯಲ್ಲಿ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಹನುಮನಹಳ್ಳಿ ತೋಟದಲ್ಲಿ ಜೂಜಾಟ ಆಡಿತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರ ಹಾಗೂ ಸಿಬ್ಬಂದಿಗಳು ಹನುಮನಹಳ್ಳಿ-ಮುಗಳಿಕಟ್ಟೆ ರಸ್ತೆಯ ಹತ್ತಿರ ಹೋಗಿ ತೆಂಗಿನ ಮರದ ಕೆಳಗೆ ಅಂದರ್ ಬಾಹಾರ್ ಜೂಜಾಟ ಆಡುತ್ತಿದ್ದ ಒಟ್ಟು 5ಜನ ಅಸಾಮಿಗಳ ಪೈಕಿ 3ಜನ ಅಸಾಮಿಗಳನ್ನು ಹಿಡಿದುಕೊಂಡಿದ್ದು 2 ಜನ ಅಸಾಮಿಗಳು ಪರಾರಿಯಾಗಿದ್ದು ಹಿಡಿದುಕೊಂಡಿದ್ದ ಅಸಾಮಿಗಳ ಹೆಸರು ವಿಳಾಸಗಳನ್ನು ಕೇಳಲಾಗಿ 1] ಉಮೇಶ ಬಿನ್ ನಾಗಭೂಷಣ್ ಯಗಟಿ ಗ್ರಾಮ 2] ಕರಿಯಪ್ಪ ಬಿನ್ ಸಣ್ಣನಂಜಪ್ಪ ಹನುಮನಹಳ್ಳಿ ಗ್ರಾಮ 3]ತಿಪ್ಪೇಶ ಬಿನ್ ಮುಪ್ಪನಪ್ಪ ಮುಗಳಿಕಟ್ಟೆ ಗ್ರಾಮ ಎಂದು ತಿಳಿಸಿದ್ದು ಪರಾರಿಯಾದ ಅಸಾಮಿಗಳ ಹೆಸರು ವಿಳಾಸ ಕೇಳಲಾಗಿ ಬೈರ @ ಭೈರಪ್ಪ ಬಿನ್ ಚಂದ್ರಪ್ಪ ಹನುಮನಹಳ್ಳಿ ಶೇಖರಪ್ಪ ವಾಟರ್ ಮ್ಯಾನ್ ಹನುಮನಹಳ್ಳಿ ಎಂದು ತಿಳಿದು ಬಂದಿದ್ದು.ಸದರಿ ಜೂಜಾಟ ಆಡಲು ಪರವಾನಿಗೆ ವಗೈರೆ ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ನಂತರ ಆಕಾಡದಲ್ಲಿದ್ದ 520/- ಹಣವನ್ನು ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಒಂದು ಪ್ಲಾಸ್ಟೀಕ್ ಚಾಪೆಯನ್ನು ಮಹಜರ್ ಮುಖೇನ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುವುದಾಗಿರುತ್ತೆ.