ದಿನಾಂಕ 25/02/2013
ಗೋಹತ್ಯೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 38/2013 ಕಲಂ 5,7,11 ಸಿ ಎಸ್ ಆಕ್ಟ್,–ಯಾರೊ ಅಸಾಮಿಗಳು
ದನಗಳನ್ನು ಕಡಿದು ಮಾಂಸವನ್ನು ಮಾರಾಟ
ಮಾಡುತ್ತಿದ್ದಾರೆ” ಎಂದು ಪೊಲೀಸ್ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ
ಬಂದ ಮೇರೆಗೆ,
ಹೋಗಿ, ಮರೆಮಾಚಿ ನಿಂತು ನೋಡಲಾಗಿ ಅಲ್ಲಿ 2 ಜನ ಅಸಾಮಿಗಳು ಒಂದು ಕೊಟ್ಟಿಗೆಯಲ್ಲಿ ದನಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದುದು ಕಂಡು ಬಂದ
ಮೇರೆಗೆ , ಅವರುಗಳನ್ನು ಹಿಡಿಯಲು ಹೋದಾಗ ಒಬ್ಬ ಆಸಾಮಿಯು
ಓಡಿ ಹೋಗಿದ್ದು, ಉಳಿದವನನ್ನು ಸುತ್ತುವರೆದು ಹಿಡಿದುಕೊಂಡು ಹೆಸರು
ಕೇಳಲಾಗಿ (1)ಜಾವೀದ್ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ, ಇಕ್ಬಾಲ್ ಎಂದು ತಿಳಿಸಿದ್ದು , ಸದರಿ ಅಸಾಮಿಯನ್ನು
ವಿಚಾರಿಸಲಾಗಿ, ದನಗಳನ್ನು ಕಡಿದು ಮಾಂಸವನ್ನು ಮಾರಾಟ
ಮಾಡುತ್ತಿದ್ದುದಾಗಿ ತಿಳಿಸಿದ್ದು, ಮಾರಾಟ ಮಾಡಲು ಪರವಾನಗಿ /ವಗೈರೆ ಇದೆಯೇ ಎಂದು
ಕೇಳಲಾಗಿ, ಸದರಿಯವನು ಯಾವುದು ಇಲ್ಲವೆಂದು ತಿಳಿಸಿದ್ದರಿಂದ,ಸದರಿ ಅಸಾಮಿಗಳು ದನಗಳನ್ನು
ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವುದು,ಖಚಿತಪಟ್ಟಿದ್ದರಿಂದ ಕೊಟ್ಟಿಗೆಯಲ್ಲಿದ್ದ. ಸುಮಾರು
100 ಕೆಜಿ, ಯಷ್ಟು ದನದ ಮಾಂಸವನ್ನು, ಒಂದು ತಕ್ಕಡಿ, ಒಂದು ಮಾಂಸ ಕಡಿಯಲು
ಉಪಯೋಗಿಸಿದ ಕಬ್ಬಿಣದ ಕತ್ತಿ , ಒಂದು ಚಾಕು, ಎರಡು ಕೆಜಿಯ, ಒಂದು ಕೆ.ಜಿ ಯ ತಲಾ ಒಂದು ತೂಗುವ ಬಟ್ಟುಗಳನ್ನು ಮತ್ತು ಸದರಿ ಆಸಾಮಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಕೇಸು
ದಾಖಲಿಸಿರುತ್ತೆ
ಮನುಷ್ಯ ಕಾಣೆ ಪ್ರಕರಣ
ಜಯಪುರ ಪೊಲೀಸ್ ಠಾಣೆ ಮೊ.ಸಂ- 16/2013 ಕಲಂ ಮನುಷ್ಯ ಕಾಣೆ– ಪಿರ್ಯಾದುದಾರರ ತಂದೆ ವೀರಪ್ಪಗೌಡ ಇವರು ಶಿಡ್ಲೆಯ
ಮನೆಯಿಂದ ಹೊರಟು ಪಿರ್ಯಾದಿಯ ಚಿಕ್ಕಮ್ಮನ ಮನೆಯಾದ ಹೆಗ್ಗಾರುಕೊಡಿಗೆಗೆ ಹೋಗಿ ಬರುವುದಾಗಿ ಹೇಳಿ
ಹೋಗಿದ್ದು ಅವರು ಬಸ್ಸಿನಿಂದ
ಹೆಗ್ಗಾರುಕೊಡಿಗೆಯಲ್ಲಿ ಇಳಿಯದೇ ಬೈರೇದವರಿನಲ್ಲಿ ಇಳಿದಿದ್ದು ಇದುವರೆಗೂ ಮನೆಗೆ ಬಾರದೇ
ಕಾಣೆಯಾಗಿರುತ್ತಾರೆ. ಸದರಿಯವರನ್ನು ಹುಡುಕಿಕೊಡಬೇಕಾಗಿ ಕೋರಿಕೊಂಡ ಮೇರೆಗೆ ಈ ಪ್ರ.ವ.ವರದಿ.
ಕೊಲೆ ಬೆದರಿಕೆ ಪ್ರಕರಣ
ನರಸಿಂಹರಾಜಪುರ ಪೊಲೀಸ್ ಠಾಣೆ ಮೊ.ಸಂ- 16/2013 ಕಲಂ 504.324.506 ಜೊತೆಗೆ 34ಐಪಿಸಿ – ಈ ದಿನ ಪಿರ್ಯದಿಯು ತನ್ನ ಭತ್ತದ ಗದ್ದೆಯಲ್ಲಿ ಗದ್ದೆಗೆ ಬೇಲಿ ಕಟ್ಟುತ್ತಿದ್ದು ಆ ಸಮಯದಲ್ಲಿ ಗದ್ದೆ ಪಕ್ಕದಲ್ಲೇ ಇರುವ ಕೆರೆಯಲ್ಲಿ ACCUSED ಕೆರೆಯಲ್ಲಿ ಮೀನು ಹಿಡಿಯಲು ಬಂದು ಬಲೆಯನ್ನು ಹಾಕುತ್ತಿದ್ದು, ನಾನು ಕೆರೆಯನ್ನು ಕುಶಾಲಪುರದ ಮಹೇಶ್ ರವರು ಪಂಚಾಯ್ತಿ ವತಿಯಿಂದ ವಹಿಸಿಕೊಂಡಿದ್ದು, ಅವರು ನನಗೆ ಕೆರೆಯನ್ನು ನೋಡಿಕೊಳ್ಳುವಂತೆ ಜವಬ್ದಾರಿ ವಹಿಸಿರುತ್ತಾರೆ ನೀವು ಮೀನುಗಳನ್ನು ಹಿಡಿಯಬಾರದು ಎಂದು ಹೇಳಿದೆ ಆಗ ಅನ್ಸರ್ ಮತ್ತು ಮುನ್ನ ರವರು ಇದು ನಿಮ್ಮ ಅಪ್ಪನ ಕೆರೆನಾ ಏಕೆ ಮೀನು ಹಿಡಿಯ ಬಾರದು ಎಂದು ಹೇಳಿ ದೊಣ್ಣೆಯಿಂದ ನನ್ನ ತಲೆಹಿಂಬಾಗಕ್ಕೆ ಹೊಡೆದ ಅನಂತರ ಜಾಫರ್ ಕೈಯಿಂದ ಮೈಕೈಗೆ ಹಾಗೂ ಬೆನ್ನಿಗೆ ಗುದ್ದಿದ, ಖಾದರ್ ಮತ್ತು ಮುನ್ನ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ನೆಲಕ್ಕೆ ಬೀಳಿಸಿ ಕೈಗಳಿಂದ ಹೊಡೆದು ನೋವುಂಟು ಖಾದರ್ ಕೈಯಿಂದ ಹೊಡೆದು ಕೆಟ್ಟಮಾತುಗಳಿಂದ ಬೈದು ನಾವು ಮೀನು ಹಿಡಿಯಲು ಬಂದಾಗ ನಮ್ಮನ್ನು ಇನ್ನೊಮ್ಮೆ ತಡೆದರೆ ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆಬೆದರಿಕೆ ಹಾಕಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 18/2013 ಕಲಂ ಮನುಷ್ಯ ಕಾಣೆ: ಪಿರ್ಯಾದುದಾರರ ಮಗ ಮಂಜುನಾಥ
ಬಿನ್. ಲೇಟ್. ಸುಂದರ , 28 ವರ್ಷ ಈತನೊಂದಿಗೆ ಪಿರ್ಯಾದಿ ಈಗ್ಗೆ ಒಂದು ವರ್ಷದಿಂದ ಮೂರ್ ಬಾಂದ್ ,
ಕೊರಡಕಲ್ಲೂ, ಮೆಣಸೆ ಗ್ರಾಮದಲ್ಲಿ ವಾಸವಿದ್ದು,
ಮಂಜುನಾಥನು ಮನೆಯಿಂದ ಈಗ್ಗೆ ಸುಮಾರು 15 ದಿನಗಳ ಹಿಂದೆ ಕೂಲಿ ಕೆಲಸಕ್ಕೆ ಹೋದವನು ಇದುವರೆವಿಗೂ
ವಾಪಸ್ಸು ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ
ಪತ್ತೆಯಾಗಿರುವುದಿಲ್ಲವೆಂದು , ಎಲ್ಲಾ ಕಡೆ ಹುಡುಕಿ ಈ ದಿವಸ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೆಂದು,
ಕಳವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 36/2013 ಕಲಂ 87 ಕೆ.ಪಿ. ಆಕ್ಟ್: ಪಿರ್ಯಾದಿಯು ಧರ್ಮಸ್ಥಳದ
ಮಂಜುನಾಥ ದೇವರ ದರ್ಶನ ವಾಪಾಸ್ಸು ಬಂದು ಮನೆಯನ್ನು ಪರಿಶೀಲಿಸಲಾಗಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ
ಬೀಗವನ್ನು ಮುರಿದು ಒಳ ಪ್ರವೇಶಿಸಿ ನಡು ಮನೆಗೆ ಬಂದು ಅಲ್ಮೇರಕ್ಕೆ ಹಾಕಿದ್ದ ಬೀಗವನ್ನು ತೆಗೆದು ಬೀರುವಿನ ಸೇಪ್ಟಿ ಲಾಕರ್ನ ಒಳಗಡೆ ಇಟ್ಟಿದ್ದ 1) 1.5
ಗ್ರಾಂ ತೂಕದ ಹಾರ್ಟ್ ಶೇಫ್ ಉಂಗುರ 2) ಒಂದು ಗ್ರಾಂ ತೂಕದ ಬಿಳಿ ಹರಳು ಇರುವ ಸೈಡ್ ರಿಂಗ್ 3) ಎರಡು
ಗ್ರಾಂ ತೂಕದ ಮಧ್ಯೆ ಕೆಂಪು ಹರಳು ಇರುವ ಎರಡು ತಾಳಿಗಳು
4) 200 ಮಿಲಿಗ್ರಾಂ ತೂಕ ಇರುವ ಕೆಂಪು ಹರಳು ಇರುವ ಸಣ್ಣ ಓಲೆಗಳು 5) ಸುಮಾರು 70 ಗ್ರಾಂ ತೂಕದ ಬೆಳ್ಳಿಯ
ಒಂದು ಜೊತೆ ಕಾಲುಂಗರ, ಒಂದು ಜೊತೆ ಮಕ್ಕಳ ಕಡಗ, ಎರಡು ಜೊತೆ ಮಕ್ಕಳ ಕಾಲುಚೈನು, ಒಂದು ಜೊತೆ ಕಾಲು ಪಿಲ್ಲೆ ಹಾಗೂ ಮಲೆನಾಡಿನಲ್ಲಿ ಅಡಿಕೆ ಸುಳಿದು ತಂದ ಸ್ವಲ್ಪ ಹಣವನ್ನು
ಕಳ್ಳತನ ಮಾಡಿಕೊಂಡು ಹೋಗಿದ್ದು ವಡವೆ ಮತ್ತು ನಗದು ಸೇರಿ ಒಟ್ಟು ಮೌಲ್ಯ ರೂ 23000/- ರೂಗಳಾಗಿರುತ್ತೆ
ಇತ್ಯಾದಿ.