ಸುಲಿಗೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 167/2013 ಕಲಂ; 392 ಐಪಿಸಿ – ಪಿರ್ಯಾದುದಾರರಾದ ಸೀತಾ ಕಣದಾಳ್ ವಾಸಿ ಇವರು ದಿನಾಂಕ 27/08/2013
ರಂದು 1650 ಗಂಟೆಯಲ್ಲಿ ಕಣದಾಳ್
ರಸ್ತೆಯಲ್ಲಿರುವ ತಮ್ಮ ವಾಸದ ಮನೆಗೆ ತೆರಳಲು ಬರುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ
ವ್ಯಕ್ತಿಗಳು ಒಂದು ಕಪ್ಪು ಬಣ್ಣದ ಬೈಕ್ ನಲ್ಲಿ ಸೈಂಟ್ ಮೇರೀಸ್ ಸ್ಕೂಲ್ ರಸ್ತೆಯಿಂದ ನನ್ನ ಮೇಲೆ
ಬೈಕ್ ನುಗ್ಗಿಸುವ ರೀತಿಯಲ್ಲಿ ಬಂದು ಬೈಕ್ ನಿಧಾನಿಸಿ ಹಿಂದೆ ಕುಳಿತಿದ್ದ ವ್ಯಕ್ತಿಯು ನನ್ನ
ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ಸುಮಾರು 55 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡನು.ನನ್ನ ಕಳುವಾದ ಸರ 45 ಗ್ರಾಂ ಚಿನ್ನದ ಸರ
ಹಾಗೂ (ಮೂರು ಮಾಂಗಲ್ಯ ಹಾಗೂ
ಕೊಂಡಿ) ಒಟ್ಟು 10 ಗ್ರಾಂ ಆಗಿದ್ದು
ಒಟ್ಟು 55 ಗ್ರಾಂ ಆಗಿದ್ದು
ಇದರ ಅಂದಾಜು ಬೆಲೆ 1.20.000/- ಆಗಿರುತ್ತೆ. ಇತ್ಯಾದಿ
ಜುಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 207/2013 ಕಲಂ; 87 ಕೆ.ಪಿ. ಆಕ್ಟ್ – ಪಿರ್ಯಾದುದಾರರಾದ ಠಾಣಾ ಹೆಚ್.ಸಿ 31 ನಾಗೇಶ ರವರು ಠಾಣಾ ಪಿ.ಸಿ.65 ಪ್ರಸನ್ನ ಕುಮಾರ್ ರವರಿಗೆ ಗಸ್ತು ನೇಮಕವಾದ ಮೇರೆಗೆ ಸದರಿಯವರು ದಿನಾಂಕ 27/08/2013 ರಂದು 1430 ಗಂಟೆಯಲ್ಲಿ ನಗರವನ್ನು ಗಸ್ತುಮಾಡುತ್ತಾ ನಗರದ ಖಾಸಾಗಿ ಬಸ್ನಿಲ್ದಾಣದ ಸೀನನ ಅಂಗಡಿ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಆರೋಪಿ ಸಂತೋಷ ಈತನು 1 ರೂ ಗೆ 80 ರೂ ಮತ್ತು 10 ರೂ ಕಟ್ಟಿದರೆ 800 ರೂ ಕೊಡುವುದಾಗಿ ನಂಬರ್ಅನ್ನು ಚೀಟಿಯಲ್ಲಿ ಬರೆದು ಕೊಡುತ್ತಿದ್ದು ಸದರಿ ವ್ಯಕ್ತಿಯನ್ನು ಹಿಡಿದು ಅಂಗಶೋದನೆ ಮಾಡಲಾಗಿ ಮಟ್ಕಾ ಜೂಜಾಟಕ್ಕೆ ಬಳಸಿದ ಒಂದು ಪೆನ್ನು ಮಟ್ಕಾ ಚೀಟಿ ಸಾರ್ವಜನಿಕರಿಂದಾ ವಸೂಲಿಮಾಡಿದ 500 ರೂ
ಹಣವನ್ನು ವಶಕ್ಕೆ ಪಡೆದು ವರದಿ ನೀಡಿದ್ದಾಗಿದೆ.