ಮತೀಯ ಗಲಭೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.241/2013 – ಕಲಂ: 153 295
ಐಪಿಸಿ – ಪಿರ್ಯಾದುದಾರರಾದ
ಸಯ್ಯದ್ ಮೀರ್ ಗೌಸ್ ರವರು ಸಯ್ಯದ್ ಯಖೀನ್ ಅಲಿಶ್ ದರ್ಗಾವನ್ನು ದಿನಾಂಕ 27-12-2013 ರಂದು ರಾತ್ರಿ
09-00 ಗಂಟೆಗೆ ಪ್ರಾರ್ಥನೆಯನ್ನು ಮುಗಿಸಿ ದರ್ಗಾಕ್ಕೆ ಬೀಗವನ್ನು ಹಾಕಿಕೊಂಡು ಹೋಗಿದ್ದು ಈ ದಿವಸ
ದಿನಾಂಕ 28-12-2013 ರಂದು ಬೆಳಗ್ಗೆ 06-00 ಗಂಟೆಗೆ ದರ್ಗಾದ ಮುಜಾವರ್ ರವರು ಬೀಗವನ್ನು
ತೆರೆಯಲು ಬಂದಾಗ ಬಾಗಿಲ ಮುಂಭಾಗದಲ್ಲಿ ಯಾರೋ
ಕಿಡಿಗೇಡಿಗಳು ಹಂದಿಯನ್ನು ಕತ್ತರಿಸಿ ಒಂದು ಕಡೆ ತಲೆ ಇನ್ನೊಂದುಕಡೆ ದೇಹವನ್ನು ಹಾಕಿ ಗೋಡೆಯ
ಮೇಲೆ ರಕ್ತವನ್ನು ಲೇಪಿಸಿ ದರ್ಗಾವನ್ನು ಅಪವಿತ್ರ ಗೊಳಿಸಿ ಒಂದು ಸಮುದಾಯದ ಜನರಿಗೆ ಅತೀವ
ನೋವುಂಟು ಮಾಡಿರುತ್ತಾರೆ. ಇತ್ಯಾದಿ
ಮತೀಯ ಗಲಭೆಗೆ
ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.242/2013 – ಕಲಂ: 143.147.148.353.332.333.149 ಐಪಿಸಿ – ಪಿರ್ಯಾದುದಾರರಾದ ಸಿಪಿಐ ಸಿ.ಮಧುಸೂಧನ್ ರವರು 1330
ಗಂಟೆಯಲ್ಲಿ ಐಸಿಐಸಿಐ ಬ್ಯಾಂಕ್ ಹತ್ತಿರ ಸಿಬ್ಬಂದಿಗಳೊಂದಿಗೆ ಕರ್ತವ್ಯವನ್ನು
ನಿರ್ವಹಿಸುತ್ತಿರುವಾಗ ಮುಸ್ಲಿಂ ಭಾಂದವರು ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ
ಮುಚ್ಚಿಸುತಿದ್ದಾರೆಂಬ ವದಂತಿಗೆ ಇನ್ನೊಂದು
ಗುಂಪಿನ ಹಿಂದು ಸಮುದಾಯದ ಜನರು ಮತ್ತು ಅಂಗಡಿ ಮುಂಗಟ್ಟು ವ್ಯಾಪಾರಸ್ಥರು ಅಂಗಡಿಗಳನ್ನು
ಮುಚ್ಚಿಸುವವರ ವಿರುದ್ದವಾಗಿ ಎಂಜಿ ರಸ್ತೆಯಲ್ಲಿ ಹನುಮಂತಪ್ಪ ಸರ್ಕಲ್ ಕಡೆ ಸುಮಾರು 500 ಜನರು
ಪ್ರತಿಭಟಿಸುತ್ತಾ ಬರುತಿದ್ದು. ಇನ್ನೊಂದು ಕಡೆಯಿಂದ ಮುಸ್ಲಿಂ ಸಮುದಾಯದವರು ಹನುಮಂತಪ್ಪ ಸರ್ಕಲ್
ಕಡೆಯಿಂದ ಸುಮಾರು 1 ಸಾವಿರ ಜನರು ಪ್ರತಿಭಟಿಸುತ್ತಾ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯ ಐಸಿಐಸಿಐ
ಬ್ಯಾಂಕ್ ಹತ್ತಿರ ಬರುತಿದ್ದಾಗ ನಗರದ ಸುತ್ತ ಮುತ್ತ 6 ಕಿ,ಮೀ ವ್ಯಾಪ್ತಿಯಲ್ಲಿ ಹಾಗೂ ಆಲ್ದೂರು ಪಟ್ಟಣದಲ್ಲಿ ಕಲಂ 144 ಸಿಆರ್ಪಿಸಿ ರೀತ್ಯಾ ನಿಷೇದಾಜ್ಷೆ
ಜಾರಿ ಇದೆ ಎಂಬ ಬಗ್ಗೆ ಪ್ರಚಾರ ಪಡಿಸುತಿದ್ದರು ಸಹ ಅದನ್ನು ಲೆಕ್ಕಿಸದೇ ಕರ್ತವ್ಯಕ್ಕೆ
ಅಡ್ಡಿಪಡಿಸಿರುತ್ತಾರೆ. ಅಲ್ಲದೇ ಅಷ್ಟರಲ್ಲಿ ಎರಡು ಕಡೆಯಿಂದ ಪೊಲೀಸರ ಮೇಲೆ
ಕಲ್ಲುತೂರಾಟವಾಗಿದ್ದು ಸ್ಥಳದಲ್ಲಿದ್ದ
ಪಿರ್ಯಾದುದಾರರ ಕುತ್ತಿಗೆಗೆ ಕಲ್ಲುತಾಗಿ ನೋವುಂಟಾಗಿರುತ್ತದೆ. ಅದೇ ಸಮಯದಲ್ಲಿ
ಪಿರ್ಯಾದುದಾರರ ಜೊತೆ ಕರ್ತವ್ಯ ನಿರ್ವಹಿಸುತಿದ್ದ
ಮ ಎಎಸ್ಐ ಕೆ,ಆರ್ ,ಸುನೀತಾ ರವರ ಬಲ ಕಿವಿಗೆ ಕಲ್ಲುತಾಗಿ ಕಿವಿ
ಹರಿದು ಹೋಗಿರುತ್ತೆ. ತಕ್ಷಣ ಅವರನ್ನು ಸಿಬ್ಬಂದಿಗಳೊಂದಿಗೆ ಚಿಕಿತ್ಸೆಗೆ ಕಳುಹಿಸಿ
ಕೊಟ್ಟಿರುತ್ತೆ. ಎರಡು ಗುಂಪಿನವರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಲಾಯಿತು.
ಎರಡು ಗುಂಪಿನವರು ಕಲ್ಲು ತೂರಾಟ ಮಾಡಿದ್ದರಿಂದ ಕೆಲ ಪೊಲೀಸರಿಗೆ ಗಾಯಗಳಾಗಿದ್ದು ಹೆಸರು
ತಿಳಿದಿರುವುದಿಲ್ಲಾ. ಮೇಲ್ಕಂಡ ಎರಡು ಗುಂಪಿನವರು
ಅಕ್ರಮ ಕೂಟ ಸೇರಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ
ಗಾಯಗೊಳಿಸಿದ್ದು ಅವರ ಕ್ರಮ ಸೂಕ್ತ ಕ್ರಮ
ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಮತೀಯ ಗಲಭೆಗೆ
ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ.243/2013 – ಕಲಂ: 143.147.504.427.149 ಐಪಿಸಿ – ಪಿರ್ಯಾದುದಾರರಾದ
ಪ್ರಕಾಶ್ ಮಯೂರ ಬೇಕರಿ ಮಾಲಿಕರು ವ್ಯಾಪಾರ ಮಾಡುತ್ತಿದ್ದಾಗ ಸುಮಾರು ಬೆಳಿಗ್ಗೆ 9-30 ಗಂಟೆಯ ಸಮಯದಲ್ಲಿ
50-60 ಜನರಿದ್ದ ಮುಸ್ಲಿಂ ಜನರ ಗುಂಪು ಪಿಯಾದುದಾರರ ಅಂಗಡಿಗೆ ಬಂದು ಗಲಾಟೆ ಮಾಡಿ ಅಂಗಡಿಯನ್ನು
ಮುಚ್ಚಲು ಬಂದು ಬಲವಂತವಾಗಿ ನಮ್ಮ ಅಂಗಡಿಯ ಮುಂಭಾಗದಲ್ಲಿ ನ ಶೋಕೇಸ್ ಗ್ಲಾಸನ್ನು ಒಡೆದು ಸುಮಾರು ಐವತ್ತು ಸಾವಿರ ರೂ ಲುಕ್ಸಾನು
ಮಾಡಿರುತ್ತಾರೆ.ಹೋಗುವಾಗ ನಮ್ಮ ಪವಿತ್ರ ಸ್ಥಳಕ್ಕೆ ಅಪಮಾನ ಮಾಡಿರುತ್ತಾರೆ.ಬೋಳಿಮಗನೆ ಎಂದು ಬೈದು
ಅಂಗಡಿ ಬಾಗಿಲನ್ನು ಬಲವಂತವಾಗಿ
ಮುಚ್ಚಿಸಿರುತ್ತಾರೆ.ಇತ್ಯಾದಿ
ಮತೀಯ ಗಲಭೆಗೆ
ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್
ಠಾಣೆ ಮೊ.ಸಂ.244/2013 – ಕಲಂ: 143.147.504.427.149 ಐಪಿಸಿ – ಪಿರ್ಯಾದುದಾರರಾದ ಗಣೇಶ ನಾಯ್ಕ ರವರು ಚಿಕ್ಕಮಗಳೂರು ಬೇಕರಿಯನ್ನು ತೆರೆದು ವ್ಯಾಪಾರ ಮಾಡುತ್ತಿರುವಾಗ ದಿನಾಂಕ 28/12/2013
ಬೆಳಗ್ಗೆ ಸುಮಾರು 09-15 ಗಂಟೆಗೆ 50-60 ಜನರ ಗುಂಪು ಅಂಗಡಿಗೆ
ಬಂದು ನಮ್ಮ ಪವಿತ್ರ ಸ್ಥಳವನ್ನು ಅಪವಿತ್ರ
ಗೊಳಿಸಿರುತ್ತಾರೆ. ಆದ್ದರಿಂದ ಈ ದಿನ ಚಿಕ್ಕಮಗಳೂರು ಬಂದ್ ಇದೆ ಎಂದು ಹೇಳಿ
ಸೂಳೇಮಗನೆ ಅಂಗಡಿ ಬಾಗಿಲನ್ನು ಹಾಕು
ಎಂದವರೆ ಗುಂಪಿನಲ್ಲಿ ಇದ್ದವರು ಶೋಕೇಸ್ ಗ್ಲಾಸ್ ಅನ್ನು ಹೊಡೆದು
ಸುಮಾರು 50 ಲಕ್ಷ ಲುಕ್ಸಾನ್ ಮಾಡಿರುತ್ತಾರೆ.
ಗಲಾಟೆ ಇದ್ದುದರಿಂದ ಗಲಾಟೆ ತಿಳಿಯಾಗುವವರೆಗೆ
ಕಾದು ತಡವಾಗಿ ಬಂದು ದೂರು ನೀಡಿರುತ್ತಾರೆ. ಇತ್ಯಾದಿ.
ಮತೀಯ ಗಲಭೆಗೆ
ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್
ಠಾಣೆ ಮೊ.ಸಂ.245/2013 – ಕಲಂ: 143.147.504.427.149 ಐಪಿಸಿ – ಪಿರ್ಯಾದುದಾರರು ವಿವೇಕ್
ಯಾಜಿ ಇವರು ಮಲ್ನಾಡ್ ಪ್ರಸ್ ಎಂಜಿರಸ್ತೆ ಯಲ್ಲಿ ತನ್ನ ಅಂಗಡಿಯನ್ನು ತೆರೆದಿದ್ದು ದಿನಾಂಕ
28/12/2013 ರಂದು ಸುಮಾರು
10-30 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಮತ್ತು ಲಕ್ಷ್ಮಣ ರಾಜು ಹಾಗೂ ಇತರೆ ಕೆಲಸಗಾರರು
ಅಂಗಡಿಯಲ್ಲಿರುವಾಗ ಸುಮಾರು 100 ಜನರಿದ್ದ ಮುಸ್ಲಿಮರ ಗುಂಪು ಬಂದು ಗಲಾಟೆ ಮಾಡಿ ಅಂಗಡಿ
ಬಾಗಿಲನ್ನು ಮುಚ್ಚುವಂತೆ ತಿಳಿಸಿ ಅಂಗಡಿಯ ಒಳಗೆ ನುಗ್ಗಿ ಶೋಕೇಶ್ ಗ್ಲಾಸನ್ನು ಒಡೆದು ಸುಮಾರು
25000 ರೂಪಾಯಿಗಳನ್ನು ಲುಕ್ಸಾನು ಮಾಡಿರುತ್ತಾರೆ ಇತ್ಯಾದಿ.
ಮತೀಯ ಗಲಭೆಗೆ
ಸಂಬಂದಿಸಿದಂತೆ ದೊಂಬಿ ಪ್ರಕರಣ
ನಗರ ಪೊಲೀಸ್
ಠಾಣೆ ಮೊ.ಸಂ.246/2013 – ಕಲಂ: 143.147.504.323,427.149 ಐಪಿಸಿ – ಪಿರ್ಯಾದುದಾರರು ಕೌಶಿಕ್
ಕಾಮದೇನು ಪ್ರಾವಿಜನ್ ಸ್ಟೋರಸ್ ಎಂಜಿ ರಸ್ತೆ ಇವರು ದಿನಾಂಕ 28/10/2013 ಬೆಳಿಗ್ಗೆ 10.45 ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ
ಸುಮಾರು 50-60 ರ ಜನರ ಮುಸ್ಲಿಂ ಯುವಕರು ಏಕಾಏಕಿ ಅಂಗಡಿ ಹತ್ತಿರ ಬಂದವರೇ ಅಂಗಡಿ ಬಾಗಿಲು
ಮುಚ್ಚುವಂತೆ ಬಲವಂತ ಪಡಿಸಿದರು.ಆಯಿತು ಏನು ಕಾರಣ ಎಂದು ಪಿರ್ಯಾದುದಾರರು ಕೇಳುವಷ್ಟರಲ್ಲಿ
ಮುಸ್ಲಿಂರ ಪವಿತ್ರ ಸ್ಥಳವನ್ನು ಯಾರೋ ದುಷ್ಕರ್ಮಿಗಳು ಅಪವಿತ್ರಗೊಳಿಸಿರುತ್ತಾರೆ.ಬಂದ್ ಆಚರಣೆ
ಮಾಡಬೇಕು ಎಂದು ಹೇಳಿದರು. ಆಗ
ಅಂಗಡಿಯಲ್ಲಿದ್ದ ಪಿರ್ಯಾದುದಾರರು ಮತ್ತು
ಅವರ ಅಣ್ಣ ಪ್ರಶಾಂತ ಬಾಗಿಲು ಮುಚ್ಚುತ್ತೇವೆ ಎನ್ನುವಷ್ಟರಲ್ಲಿ ಬಾಗಿಲು ಹಾಕಿರೋ ಸೂಳೇಮಕ್ಕಳ
ಎಂದು ಅವಾಚ್ಯ ಶಬ್ದಗಳಂದ ಬೈದು ರೋಲಿಂಗ್ ಶೆಟರ್
ಎಳೆದಾಡಿ ಅಂಗಡಿ ಮುಂದೆ ನೇತಾಕಿದ್ದ ವಸ್ತುಗಳನ್ನು ಎಳೆದು ಹಾಕಿ ಪಿರ್ಯಾ್ದುದಾರರಿಗೆ
ಗುಂಪಿನಲ್ಲಿದ್ದ ಒಂದಿಬ್ಬರು ಕೈಗಳಿಂದ ನನ್ನ ಮೈಗೆ ಗುದ್ದಿರುತ್ತಾರೆ.ಸಾಮಾನುಗಳನ್ನು ಎಳೆದು
ಹಾಕಿದ್ದರಿಂದ ಮತ್ತು ಕೇಸು ಗ್ಲಾಸನ್ನು ಹೊಡೆದು ಹಾಕಿದ್ದರಿಂದ ಸುಮಾರು 1000/- ರೂ ಲುಕ್ಸಾನು
ಉಂಟಾಗಿರುತ್ತೆ.