ದರೋಡೆ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.330/2012 ಕಲಂ 395 ಐಪಿಸಿ– ದಿನಾಂಕ 29/10/2012 ರಂದು 0130 ರಿಂದ 0230 ರ ಅವಧಿಯಲ್ಲಿ ದೇವರಹಳ್ಳಿ ಬಸ್ ಸ್ಟಾಪ್ ಮುಂದಿನ ಕೆ ಎಂ ರಸ್ತೆ ಯಲ್ಲಿ ಪಿರ್ಯಾದಿ ಹೊನ್ನಪ್ಪ ಭಟ್ಕಳ ವಾಸಿ ಇವರು ಸ್ನೇಹಿತರೊಂದಿಗೆ ಕೆ-01/1667 ರ ನಂಬರಿನ ಕಾರನ್ನು ನಿಲ್ಲಿಸಿ ಬಹಿರ್ದೇಸೆಗೆ ಹೋಗಿದ್ದಾಗ ಅಲ್ಲಿಗೆ ಕಾರಿನಲ್ಲಿ ಬಂದ 05 ಜನರು ಚಾಕು ತೋರಿಸಿ ಪಿರ್ಯಾದಿ ಹಾಗೂ ಅವರ ಸ್ನೇಹಿತರ ಬಳಿ ಇದ್ದ 10 ಗ್ರಾಂ ತೂಕದ ಚೈನು, 3100/- ನಗದು ಹಣ ಹಾಗೂ 03 ಮೊಬೈಲ್ ಗಳನ್ನು ದೋಚಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ ಒಟ್ಟು 44,700/- ರೂಗಳಾಗುತ್ತದೆ.
ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.332/2012 ಕಲಂ 379 ಐಪಿಸಿ– ದಿನಾಂಕ 26/10/2012 ರಂದು ಪಿರ್ಯಾದಿ ಹಿರಿಯಣ್ಣಗೌಡ ಇಂದಾವರ ವಾಸಿ ಇವರಿಗೆ ಇಂದಾವರ ಗ್ರಾಮದಲ್ಲಿ ಜಮೀನು ಇದ್ದು, ಸದರಿ ಜಮೀನಿನ ಸುತ್ತ ತಂತಿ ಬೇಲಿ ಹಾಕಿದ್ದು, ಸದರಿ ಮುಳ್ಳು ತಂತಿಯನ್ನು ಯಾರೋ ಕಳ್ಳರು ಕಳುವು ಮಾಡಕೊಂಡು ಹೋಗಿದ್ದು, ಸುಮಾರು 75 ಕೆ.ಜಿಯಷ್ಟು ಮುಳ್ಳು ತಂತಿ ಕಳುವಾಗಿದ್ದು, ಅದರ ಬೆಲೆ 6000/- ರೂ ಗಳಾಗಿರುತ್ತೆ.
ಅಕ್ರಮ ಮದ್ಯ ವಶ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.94/2012 ಕಲಂ 34 ಕೆ.ಇ. ಆಕ್ಟ್– ದಿನಾಂಕ 29/10/2012 ರಂದು 1815 ಗಂಟೆಯಲ್ಲಿ ಉಪ್ಪಳ್ಳಿಯಲ್ಲಿ ಆರೋಪಿ ಪ್ರಕಾಶ್ ಈತನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲು ಇಟ್ಟಿದ್ದ 180 ML ನ CAPTAIN MARTIN’S SPECIAL WHISKEY ಯ 28 ಮಧ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಿರುತ್ತೆ.ಇದರ ಅಂದಾಜು ಮೌಲ್ಯ 1200/-ರೂಗಳಾಗಿರುತ್ತೆ.ಪಿಎಸ್ಐ ರವರು ದಾಳಿ ನಡೆಸಿ ಕ್ರಮಕೈಗೊಂಡಿರುವುದಾಗಿರುತ್ತೆ.